Thursday, April 23, 2026
ಚಕ್ರ ತಿರುಗೀ ತಿರುಗೀ ..
Wednesday, January 28, 2026
ಧಾವಂತವೇನಿಲ್ಲ ಗುರಿ ಸೇರಲು..
ಒಂದಿಷ್ಟು ವರ್ಷಕ್ಕೊಮ್ಮೆ ಮರುಜನ್ಮ ಬರುತ್ತಂತೆ. ಹಾಗೆ ಒಂದಷ್ಟು ವರ್ಷದ ನಂತರ ಮತ್ತೆ ಬರೆಯುವ ಹುಚ್ಚು ಬಂದಿದೆ. ಭೂಮಿ ಗುಂಡಗಿದೆಯಂತೆ. ಹೇಗೆ ಹೋದರೂ ಮತ್ತೆ ತಿರುಗಿ ಅಲ್ಲಿಗೆ ಬರ್ತೀವಂತೆ. ಈ ವಿಚಾರ ಮತ್ತೆ ಮತ್ತೆ ನಿಜವಾಗ್ತಿದೆ. ಹಾಡು ಹೇಳಿ ಕೊಡುವ ಶಿಬಿರ, ಆಪ್ತ ಸಲಹೆ ಸಮಾಧಾನ, ಆಕ್ಯುಪ್ರೆಷರ್ ಕಲಿಕೆ ಹಾಗೂ ಚಿಕಿತ್ಸೆ ಎಲ್ಲವನ್ನೂ -ಸಂಕಲ್ಪ ಫಾರ್ ಚೇಂಜ್ ಅನ್ನುವ, ನನ್ನ ಸ್ನೇಹಿತೆ ಪ್ರಾರಂಭಿಸಿರುವ NGO ನಲ್ಲಿ ಮಾಡ್ತಾ ಇದ್ದೀನಿ. ಬದುಕಿನ ವಿವಿಧ ಘಟ್ಟದಲ್ಲಿ ಹುಟ್ಟಿಕೊಂಡಿದ್ದ ಆಸೆಗಳು ಈಗ ಸಾಕಾರವಾಗುತ್ತಾ ಇವೆ. ಧಾವಂತವಿಲ್ಲದೆ ದಶಕದ ನಂತರ ಬರೆದ ಕವನ-
ಧಾವಂತವೇನಿಲ್ಲ ಗುರಿ ಸೇರಲು
ಮುಗಿಯದಾ ಪಯಣವಿದು ನಿಡುಸುಯ್ಯಲು ||
ಗುರಿಯ ಮೊಳಕೆಯದು
ಮೊಳೆತ ಬಗೆ ಹೇಗೆ?
ಇಂದಿನ ಘಟ್ಟವನು
ತಲುಪಿದ್ದು ಹೇಗೆ?
ನನ್ನೆಲ್ಲಾ ಕನಸಿನಲಿ
ಒಳಗೊಂಡು ದೇವ
ಮುಂದಿನ ದಾರಿಯನು
ತೋರುವನು ಎನಗೆ ||೧||
ಹುಲ್ಲು ಮೊಳೆಯದ
ಒಣಕು ನೆಲದಲ್ಲಿ
ಹಚ್ಚನೆಯ ಹಸಿರು
ತೋಟವದು ಹೇಗೆ ?
ಕನಸು ಕಾಣುವುದು
ಮರೆತ ಮನದಲ್ಲಿ
ಉಕ್ಕುಕ್ಕಿ ಬರುತಲಿದೆ
ಸಿಹಿಗನಸು ಹೀಗೆ..||೨||
ಒಂದು ಎರಡಲ್ಲ
ನೂರಾರು ಜನುಮದಲಿ
ಮತ್ತೆ ಮತ್ತೆ ನೆಡೆದ
ಕಾಲ್ದಾರಿ ಇಹುದು
ಪ್ರತಿಯೊಂದು ಜನುಮದಲಿ
ಕೆಲ ಹೆಜ್ಜೆ ನೆಡೆಯುತ
ಗಮ್ಯವಿದು ಸನಿಹಕ್ಕೆ
ಬಂದಿಹುದು ನೋಡ..||೩||
Wednesday, July 20, 2016
ಹೊಸ ಹಾದಿಯಲ್ಲಿ.. ಹಳೆಯ ಕನಸುಗಳನ್ನು ನನಸಾಗಿಸುತ್ತಾ..
Saturday, November 17, 2012
New beginning.. New life..
I have joined a Diploma course in counselling that touches different types of counselling and gives practical exposure to counselling. Its been more than 4 months that I have been part of this course and lot of things have happened since then.
After joining this course, I have seen a different world and I am liking the idea of "going slow" in almost everything.. As per our Institute Head and learned faculty Dr. Ali, we have to unlearn lot of things to really learn new things and make those lessons, a part of our lives. Delayed gratification means a lot and I am understanding that now. It's Road less traveled.
I joined a part time job as library executive initially, but couldn't continue for more than 3 months as I was getting into the "hectic schedule" again. Now, I'm having lot of time - visited my native, spent some time with parents, most of the days, will be at home when my husband returns home and when he leaves to office, read what I like, Got in touch with my friends again, have my morning Tea on terrace - without taking my mobile along with me, be at home during sunset, spend some time with myself alone - in silence.
All these have cost me something for sure. Its less money in Bank, no hiring Auto unless its emergency or necessity, no shopping unless I really need to replace some dress, Restrict my expenditure, Travel in Public transport - BMTC even if its crowded (like good old days :) ), some insecurity about future, not planning to buy site / house, no new gadgets.... But, I AM IN LOVE WITH WHAT I AM DOING. I think I can touch more lives. Some day I might have to return to IT to earn some money, but my PRESENT is really Pleasant :D.
Wednesday, July 13, 2011
Learning something new...
I am done with 3 classes already. First class was taken by Mr. Dilip Patel who explained the framework of the course and do's & dont's. Second class was taken by Dr. Vijay Kumar who gave us overview of brain and its functions that would help us understand few problems we might come across, when we get into counseling people. He suggested a book - "Phantoms in the brain" by V.S. Ramachandran. I have bought the book and yet to read. 3rd class was by Prof. Vijayambika who gave us the importance of having "doses of Psychology" in everyone's life. So far, so good. I loved to make a career in Psychology which didn't materialze due to various reasons. "Why do people behave the way they do.." is the question I have always thought about. If this course can help me get the answers to those questions or at least show me the path, it would be wonderful. What say?
Tuesday, April 12, 2011
ಪಶ್ಚಾತ್ತಾಪ ಅಂದರೆ..
ಒಮ್ಮೆ ನನ್ನ ಸಹೋದ್ಯೋಗಿಗೂ ನನಗೂ ಒಂದು ಕೆಲಸದ ಬಗ್ಗೆ ವಾಗ್ವಾದ ನಡೆಯಿತು. ಅವರು ಆ ಕೆಲಸವನ್ನು ಮಾಡಬೇಕೆಂದು ನಾನೂ, ನಾನು ಆ ಕೆಲಸ ಮಾಡಬೇಕೆಂದು ಅವರೂ ಪಟ್ಟು ಹಿಡಿದಿದ್ದೆವು. ನಾನು ಹಿಂದೂ, ಅವರು ಮುಸ್ಲಿಂ. ನಾವೆಲ್ಲರೂ ಬಹಳಷ್ಟು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ನಮ್ಮಲ್ಲಿ ಮತ - ಧರ್ಮಗಳ ಬಗ್ಗೆ ಬೇಧ ಭಾವಗಳಿರುತ್ತಿರಲಿಲ್ಲ. ಅಣ್ಣ ತಮ್ಮಂದಿರಂತೆ ಇರುತ್ತಿದ್ದ ನಮಗೆ ಎಂದೂ ಜಾತಿ, ಮತಗಳ ಕಾರಣದಿಂದ ಕಿತ್ತಾಟ ಮಾಡುವ ಸಂಭಾವನೆಯೇ ಇರುತ್ತಿರಲಿಲ್ಲ. ಅಂದು ಮಾತನಾಡುತ್ತಿರುವಾಗ ಅವರು "ನೀವು ಜಾತಿ ಬುದ್ದಿ ತೋರಿಸುತ್ತಿದ್ದೀರಿ" ಅಂದರು. ನನ್ನ ಮುಂಗೋಪಕ್ಕೆ ಕಡಿವಾಣ ಹಾಕುವಾವರು ಯಾರು? ಸಿಟ್ಟಿನಿಂದ ಅವರ ಕಾಲರನ್ನು ಹಿಡಿದು ನಮ್ಮ ಮೇಲಧಿಕಾರಿಗಳ ಬಳಿ ಕರೆದುಕೊಂಡು ಹೋದೆ. ಸದಾ ಒಂದಾಗಿ ಕೆಲಸ ಮಾಡುತ್ತಾ, ನಮ್ಮಷ್ಟಕ್ಕೆ ಇರುತ್ತಿದ್ದ ನಾವು ಹೀಗಾಗಿದ್ದು ನೋಡಿ ಉಳಿದವರೆಲ್ಲ ಗಾಬರಿಗೊಂಡಿದ್ದರು. ನಮ್ಮ ಮೇಲಧಿಕಾರಿಗಳು ಗಾಬರಿಗೊಂಡರೂ, ನನ್ನಿಂದ ನನ್ನ ಸ್ನೇಹಿತರನ್ನು ಬಿಡಿಸಿ ಎರಡು ದಿನದ ನಂತರ ಮಾತನಾಡೋಣ ಎಂದು ಸಮಾಧಾನ ಹೇಳಿದರು.
ಮರು ದಿನ ಪಕ್ಕದ ಆಫೀಸಿನಲ್ಲಿ ಕೆಲಸ ಮಾಡುವವರೊಬ್ಬರು ನನ್ನನ್ನು ಹುಡುಕಿಕೊಂಡು ಬಂದರು. "ಸಾರ್, ಜೋಪಾನವಾಗಿರಿ. ಎಲ್ಲ ಮುಸ್ಲಿಂ ಜನರೂ ಒಂದಾಗಿ ನಿಮ್ಮನ್ನು ಹೊಡೆಯಬೇಕೆಂದು ತೀರ್ಮಾನ ಮಾಡಿಕೊಂಡಿದ್ದಾರೆ. ಯೋಚನೆ ಮಾಡಬೇಡಿ. ನಾವೆಲ್ಲಾ ನಿಮಗೆ support ಮಾಡುತ್ತೀವಿ" ಅಂದರು. ನಾನು ಸುಮ್ಮನೆ ಉಳಿದೆ. ಅವರೂ ಏನೂ ಪ್ರತಿಕ್ರಿಯೆ ಸಿಗದಿದ್ದರಿಂದ ಹೊರಟು ಹೋದರು. ನನಗೆ ಶುರುವಾಯಿತು tension. ನನ್ನಿಂದ ಒಂದು ಹಿಂದೂ - ಮುಸ್ಲಿಂ ಗಲಾಟೆಯಾಗಬಹುದೆಂಬ ಕಲ್ಪನೆಯೇ ಭಯಂಕರವಾಗಿತ್ತು. ಮರುದಿನ ಬೆಳಿಗ್ಗೆ ದೇವರಿಗೆ ನಮಸ್ಕಾರ ಮಾಡಿ ನನ್ನ ಮುಸ್ಲಿಂ ಗೆಳೆಯರ ಹತ್ತಿರ ಹೋದೆ. ಅವರಿರಲಿಲ್ಲ. ಆ ದಿನ ಗಲಾಟೆಯಾಗುವಾಗ , ಅಲ್ಲಿ ಇನ್ನೊಬ್ಬ ಸಹೋದ್ಯೋಗಿಯಿದ್ದರು. ಅವರ ಬಳಿ ಹೋಗಿ ಮಾತನಾಡಿದರೆ ನಮ್ಮ ಜಗಳದ ಇನ್ನೊಂದು version ಸಿಗಬೇಕೆ? ನನ್ನ ಜೊತೆ ವಾದ ಮಾಡುವಾಗ ಅವರು ಹೇಳಿದ್ದು "ಜಾಸ್ತಿ ಬುದ್ದಿ" ಎಂದು, "ಜಾತಿ ಬುದ್ದಿ" ಎಂದಲ್ಲ. ನಾನು ಅವರ ಉರ್ದು ಮಿಶ್ರಿತ ಭಾಷೆಯನ್ನೂ ತಪ್ಪಾಗಿ ತಿಳಿದಿದ್ದೆ ಅಂದಾಗ ನನ್ನ ಮನಃಸ್ಥಿತಿಯನ್ನು ಊಹಿಸಿಕೊಳ್ಳಿ!!
ನನ್ನ ಸ್ನೇಹಿತರು ಬಂದ ನಂತರ ಅವರಲ್ಲಿ ಕ್ಷಮೆಯಾಚಿಸಿದೆ. ಅವರೂ ಇದನ್ನು ಮರೆತು ಬಿಡುವ ದೊಡ್ಡ ಮನಸ್ಸಿನವರಾಗಿದ್ದರಿಂದ ಒಂದು ದೊಡ್ಡ ಗಲಾಟೆ ತಪ್ಪಿ ಹೋಯಿತು. ನನಗೆ ಅವರೆಲ್ಲ ಸೇರಿ ಹೊಡೆದಿದ್ದರೆ ನನಗೆ ತೊಂದರೆಯಿಲ್ಲ. ಆದರೆ ಅದು ಅಣ್ಣ ತಮ್ಮಂದಿರಂತಿರುವ ನಮ್ಮ ಸಹೋದ್ಯೋಗಿಗಳಲ್ಲಿ ದ್ವೇಷದ ಬೀಜ ಬಿತ್ತಿದರೆ ಅನ್ನುವ ಭೀತಿ ಹೇಗಿರುತ್ತದೆ ಗೊತ್ತೇ? ಅದಕ್ಕೆ ಅಲ್ಲವೇ ದೊಡ್ಡವರು ಹೇಳಿರುವುದು - "ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು " ಅಂತ.
ಎಷ್ಟು ನಿಜ ಅಲ್ಲವೇ? pradigm shift ಅನ್ನುವುದರ ಬಗ್ಗೆ email ಫಾರ್ವರ್ಡ್ ಗಳು ಬರುತ್ತಲೇ ಇರುತ್ತವೆ. ಇದೂ ಕೂಡ ಅಂಥದ್ದೊಂದು ಕಥೆ ಅನ್ನಿಸಿತು. ಬರೆದೆ. ನೀವೇನನ್ನುತ್ತೀರ?
Saturday, February 12, 2011
ಸೂರ್ಯಾಸ್ತಮಾನದ ಖುಷಿ..
ನಮ್ಮ ಆಫೀಸಿನ ದೊಡ್ಡ ಕಟ್ಟಡಗಳ ಒಳಗೆ ಬಂಧಿಯಾಗಿರೋ ನನಗೆ ಸಂಜೆ 6:15 ಕ್ಕೆ ಹೊರಡೋದಂದ್ರೆ ಖುಷಿ. ಅದ್ಯಾಕೆ ಅಂತೀರ? ಮೆಟ್ಟಿಲನ್ನು ಇಳಿಯುವಾಗ ಒಂದು ದೊಡ್ಡ ಕಿಟಕಿ ಇದೆ. ದೇವರ ದಯದಿಂದ ಅದನ್ನೂ ಕೂಡ ಮರೆ ಮಾಡಬೇಕು ಅಂತ ನಮ್ಮ ಆಫೀಸಿನವರಿಗೆ ಅನ್ನಿಸಿಲ್ಲ. ಆ ದೊಡ್ಡ ಕಿಟಕಿಯಿಂದ ಸೂರ್ಯಾಸ್ತಮಾನ ಎಷ್ಟು ಚೆನ್ನಾಗಿ ಕಾಣುತ್ತೆ ಅಂತೀರ? ಅದು ಕಿತ್ತಳೆ ಬಣ್ಣ ಅಲ್ಲ, ಕೆಂಪಲ್ಲ, ಸುತ್ತ ಮುತ್ತಲಿನ ಬಣ್ಣ ನೀಲಿಯಲ್ಲ, ಕಪ್ಪಲ್ಲ.. ಒಂದೈದು ನಿಮಿಷ ನಿಂತು ನೋಡೋಣ ಅನ್ನಿಸುತ್ತೆ. ಆಹಾ.. ಎಂತಹ ಅದ್ಭುತ ದೃಶ್ಯ ಅಂತ ಒಂಥರಾ ಖುಷಿ ಆಗುತ್ತೆ. ಇದನ್ನು ಸೆರೆ ಹಿಡಿಯೋ camera ನನ್ನಲ್ಲಿಲ್ವಲ್ಲ ಅಂತ ಪೇಚಾಡೋ ಹಾಗೆ ಆಗುತ್ತೆ. ಮತ್ತೆ ಅದರ ಹಿಂದೆಯೇ camera ಇದ್ದರೆ ಈ ದೃಶ್ಯವನ್ನು ನೋಡುವುದನ್ನು ಬಿಟ್ಟು ಹೇಗೆ ಫೋಟೋ ತೆಗೆಯೋದು ಅಂತ ಇಷ್ಟು ಚೆಂದದ ಸಮಯ ಹಾಳು ಮಾಡುತ್ತಿದ್ದೆ ಅನ್ನಿಸುತ್ತೆ. ನನಗೇ ಇದನ್ನು ಹೀಗೇ ಚಿತ್ರ ಬಿಡಿಸಿ ಹೀಗೆ ಬಣ್ಣ ತುಂಬಲು ಬಂದಿದ್ದರೆ!! ಅಂತ ಆಸೆಯಾಗುತ್ತೆ. ನನಗೆ ಬರುವುದಿಲ್ಲವಾದರೂ, ನಮ್ಮ ಹರಿಣಿಗೆ ತೋರಿಸಿದರೆ, ಆ ಚಿತ್ರ ಕಲಾವಿದೆ ಹೀಗೆ ಒಂದು ನಕಲು ತಯಾರು ಮಾಡುತ್ತಿದ್ದಳೋ ಏನೋ ಅಂತಲೂ ಅನ್ನಿಸುತ್ತೆ. ಒಂದೊಂದು ಮಹಡಿಯಿಂದಲೂ ಇಳಿಯುವ ಹೊತ್ತಿಗೆ ಸೂರ್ಯ ಒಂದೊಂದೇ ಇಂಚಿನಷ್ಟು ಇಳಿಯುತ್ತಾನೆ. ಕಡೆಯ ಕೆಲವು ಮಹಡಿಯಲ್ಲಿ ಕಿಟಕಿ ಇಲ್ಲ :(. ಕೆಳಗೆ ಬರುವ ಹೊತ್ತಿಗೆ ಸೂರ್ಯ ಮರೆಯಾಗಿರ್ತಾನೆ. ನಿಜವಾಗಿಯೂ ಮುಳುಗಿದನೋ, ಅಥವಾ ದೂರದ ಒಂದು ಕಾಂಕ್ರೀಟು ಕಟ್ಟಡ ಅವನನ್ನು ಮರೆಸಿತೋ ಅಂತ ಗೊತ್ತಿಲ್ಲ.
ದಿನವಿಡೀ ಹೊರಗಡೆ ಜೋರಾಗಿರೋ ಬಿಸಿಲಿದ್ದರೂ, ಒಳಗೆ ಸಂಪೂರ್ಣ ಕತ್ತಲೆ ಮಾಡಿಕೊಂಡು, ಕಿಟಕಿಗಳಿಗೆ ಮರೆ ಮಾಡಿ, ಕೃತಕ ಬೆಳಕಿನಲ್ಲಿ, ಗಾಳಿಯಾಡದಂತೆ ಮಾಡಿ A.C. ಹಾಕಿರೋ ಚಿಕ್ಕ 2 X 3 cubicle ನಲ್ಲಿ ಜೀವನವಿಡೀ ಕೆಲಸ ಮಾಡಿ, ಸಮಯ ಕಳೆಯುವ ನನ್ನಂತಹ ಜನರಿಗೆ ಹೀಗೊಂದು ಸೂರ್ಯಾಸ್ತವು ದಿನವೂ ಇರುವಂಥದೇ ಆದರೂ ಕೂಡ ಬಹಳ ದೊಡ್ಡ ಖುಷಿ ಕೊಡುತ್ತದೆ.
ಮೊನ್ನೆ ನಮ್ಮ ಆಫೀಸಿನ ಎದುರಿಗೆ ಇನ್ನೊಂದು ಕಟ್ಟಡ ಕಟ್ಟಲು ತಯಾರಿ ನಡೆಯೋದನ್ನು ನೋಡಿದೆ :(. ಹೊಸ ಕಟ್ಟಡ ಈ ಸುಂದರ ದೃಶ್ಯವನ್ನು ಮರೆ ಮಾಡದಿರಲಿ ಅಂತ ದೇವರಲ್ಲಿ ಬೇಡಿಕೊಳ್ತಿದೀನಿ!!!